Wednesday, March 25, 2009

ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

ತಾಯಿ .,
ಕನಸಿನ ಗೋಪುರ ಕಟ್ಟಿಸಿ .,
ಅವುಗಳ ಜೊತೆಗಿದ್ದು ನನಸಾಗಿಸಿಬಿಟ್ಟೆ.,
ಪ್ರತಿ ಹೆಜ್ಜೆಯಲ್ಲೂ ನೀತಿ ಪಾಠ ಹೇಳಿ
ಗದರಿಸಿ,ಬೆದರಿಸಿ .,
ತಿದ್ದಿ , ತೀಡಿ.,
ಸಮಾಜದಲ್ಲಿ ನೆಲೆ ಕಲ್ಪಿಸಿಕೊಟ್ಟೆ.,
ಸಮಾಜದಲ್ಲಿನ ಗೌರವ ,ಗಳಿಸಿದ ಹೆಸರು
ಎಲ್ಲವನ್ನ ನಿನಗರ್ಪಿಸಿ ಬಿಡಬೇಕು
ಎನ್ನುವಸ್ಟರಲ್ಲಿ ನೀ
ನಮ್ಮನ್ನ ಅಗಲಿಬಿಟ್ಟೆ.,
ತಾಯಿ
ನೀ ನನ್ನ ಕೂಗುತ್ತಿದ್ದ ಪರಿ
ಇನ್ನ ಕಿವಿಯಲ್ಲಿ ಗುಯೆಂನುತ್ತಿದ್ದೆ .,
"ಲೇ ಕರಿಯ ಏಳೂ ಸಾಕು "'.,
ಎನ್ನುವ ಮಾತೆ.,
ನನ್ನನ್ನ ಈ ಮಟ್ಟಕ್ಕೆ ಎಳೆದು ತಂದಿದೆ .,
ತಾಯಿ
ಎಲ್ಲರನ್ನ ಸಾಲಾಗಿ ಕೂರಿಸಿ
ನೀ ಮಾಡಿ ಬಡಿಸುತ್ತಿದ್ದ
ರಾಗಿ /ಗೋದಿ ಮುದ್ದೆ
ಮೇಲೆ ಗುಂಡಿ ಮಾಡಿ ನೀ
ಹೊಯ್ಯುತ್ತಿದ್ದ ತುಪ್ಪ,ಜೊತೆಗೆ
ಬಡಿಸುತ್ತಿದ್ದ ಹುಣಸೆಹುಳಿ ಸಾರು
ನಾ ಇನ್ನಾ ಮರೆತಿಲ್ಲ .,
ಅದೇಕೋ ಅವೆಲ್ಲವನ್ನ ಈಗ
ನನ್ನಮ್ಮ ಮಾಡಿಬಡಿಸಿದರೆ
ತಿನ್ನುವ ಮನಸಿಲ್ಲ .,
ತಾಯಿ
ನಿನ್ನ ಪ್ರತಿ ಹೆಜ್ಜೆ
ನಿನ್ನ ದೃಷ್ಟಿ ಕೋನ
ನೀ ಕಂಡ ಕನಸುಗಳು
ನೀ ನನ್ನಿಂದ ಬಯಸುತ್ತಿದ್ದ
ಕೆಲ ನಡೆ ನುಡಿಗಳು
ಇನ್ನ ಕಣ್ಣ ಕಟ್ಟಿವೆ .,
ಅದಕ್ಕೆ ಏನೋ ನನ್ನ ಮನಸ್ಸು ಇನ್ನ
"ಸಾಧನೆಯ" ಹಾದಿಯಲ್ಲಿದೆ .,
ತಾಯಿ
ಬದುಕಿಗೆ ರೂಪರೇಷೆ ತೋರಿಸಿ .,
ನನ್ನ ಪ್ರತಿ ದಾರಿಗೆ ದೀಪವಾಗಿ
ಎಲ್ಲಿಯು ಏನು ಕೊರೆತೆಯಾಗಿಸದೆ
ನನ್ನ ಮನಸೆಲ್ಲ ತುಂಬಿ ಕೊಂಡು ಬಿಟ್ಟೆ
ನಾ ನಿನ್ನ ಎಂದೂ ಮರೆಯದಿರಲೆಂದು ?
ನಿನ್ನ ಸಾವ ನೀನೆ ತಂದು ಕೊಂಡು ಬಿಟ್ಟೆ ?
ಇಂತಿ
ಚಾರ್ಲಿ .,.............................. ನೀನಿಲ್ಲದ ಬಾಳು ಅದು ಬೆಂಗಾಡು

No comments: