Wednesday, March 25, 2009

ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

ತಾಯಿ .,
ಕನಸಿನ ಗೋಪುರ ಕಟ್ಟಿಸಿ .,
ಅವುಗಳ ಜೊತೆಗಿದ್ದು ನನಸಾಗಿಸಿಬಿಟ್ಟೆ.,
ಪ್ರತಿ ಹೆಜ್ಜೆಯಲ್ಲೂ ನೀತಿ ಪಾಠ ಹೇಳಿ
ಗದರಿಸಿ,ಬೆದರಿಸಿ .,
ತಿದ್ದಿ , ತೀಡಿ.,
ಸಮಾಜದಲ್ಲಿ ನೆಲೆ ಕಲ್ಪಿಸಿಕೊಟ್ಟೆ.,
ಸಮಾಜದಲ್ಲಿನ ಗೌರವ ,ಗಳಿಸಿದ ಹೆಸರು
ಎಲ್ಲವನ್ನ ನಿನಗರ್ಪಿಸಿ ಬಿಡಬೇಕು
ಎನ್ನುವಸ್ಟರಲ್ಲಿ ನೀ
ನಮ್ಮನ್ನ ಅಗಲಿಬಿಟ್ಟೆ.,
ತಾಯಿ
ನೀ ನನ್ನ ಕೂಗುತ್ತಿದ್ದ ಪರಿ
ಇನ್ನ ಕಿವಿಯಲ್ಲಿ ಗುಯೆಂನುತ್ತಿದ್ದೆ .,
"ಲೇ ಕರಿಯ ಏಳೂ ಸಾಕು "'.,
ಎನ್ನುವ ಮಾತೆ.,
ನನ್ನನ್ನ ಈ ಮಟ್ಟಕ್ಕೆ ಎಳೆದು ತಂದಿದೆ .,
ತಾಯಿ
ಎಲ್ಲರನ್ನ ಸಾಲಾಗಿ ಕೂರಿಸಿ
ನೀ ಮಾಡಿ ಬಡಿಸುತ್ತಿದ್ದ
ರಾಗಿ /ಗೋದಿ ಮುದ್ದೆ
ಮೇಲೆ ಗುಂಡಿ ಮಾಡಿ ನೀ
ಹೊಯ್ಯುತ್ತಿದ್ದ ತುಪ್ಪ,ಜೊತೆಗೆ
ಬಡಿಸುತ್ತಿದ್ದ ಹುಣಸೆಹುಳಿ ಸಾರು
ನಾ ಇನ್ನಾ ಮರೆತಿಲ್ಲ .,
ಅದೇಕೋ ಅವೆಲ್ಲವನ್ನ ಈಗ
ನನ್ನಮ್ಮ ಮಾಡಿಬಡಿಸಿದರೆ
ತಿನ್ನುವ ಮನಸಿಲ್ಲ .,
ತಾಯಿ
ನಿನ್ನ ಪ್ರತಿ ಹೆಜ್ಜೆ
ನಿನ್ನ ದೃಷ್ಟಿ ಕೋನ
ನೀ ಕಂಡ ಕನಸುಗಳು
ನೀ ನನ್ನಿಂದ ಬಯಸುತ್ತಿದ್ದ
ಕೆಲ ನಡೆ ನುಡಿಗಳು
ಇನ್ನ ಕಣ್ಣ ಕಟ್ಟಿವೆ .,
ಅದಕ್ಕೆ ಏನೋ ನನ್ನ ಮನಸ್ಸು ಇನ್ನ
"ಸಾಧನೆಯ" ಹಾದಿಯಲ್ಲಿದೆ .,
ತಾಯಿ
ಬದುಕಿಗೆ ರೂಪರೇಷೆ ತೋರಿಸಿ .,
ನನ್ನ ಪ್ರತಿ ದಾರಿಗೆ ದೀಪವಾಗಿ
ಎಲ್ಲಿಯು ಏನು ಕೊರೆತೆಯಾಗಿಸದೆ
ನನ್ನ ಮನಸೆಲ್ಲ ತುಂಬಿ ಕೊಂಡು ಬಿಟ್ಟೆ
ನಾ ನಿನ್ನ ಎಂದೂ ಮರೆಯದಿರಲೆಂದು ?
ನಿನ್ನ ಸಾವ ನೀನೆ ತಂದು ಕೊಂಡು ಬಿಟ್ಟೆ ?
ಇಂತಿ
ಚಾರ್ಲಿ .,.............................. ನೀನಿಲ್ಲದ ಬಾಳು ಅದು ಬೆಂಗಾಡು

Sunday, March 15, 2009

ನನ್ನ ಮನದಾಳದ ಮಾತು ಅ ನನ್ನ ಗುರುವಿಗೆ - ಭಾಗ ೨

ಏನೋ ಪಡೆದು ಸಂತೋಷ ಪಟ್ಟರೆ ಏನುಂಟು Special ಜೀವನದಲ್ಲಿ ...
ಎಲ್ಲಾ (ನಿನ್ನ ) ಕಳೆದುಕೊಂಡೂಮೇಲೂ ........
ಸೊಂತೋಷ ಪಡುವುದೇ Very Special .............. :) :)



ಬೇರೆಯವರ ಅಳು ನಿಲ್ಲಿಸಿ .. ಅವರನ್ನು ನಗುವಂತೆ ಮಾಡುವುದೇ ಜೀವನ ,,,,






ನಿನ್ನ ಹೊಗಳಿ ಬರೆಯುತ್ತೇನೋ .. ತೆಗಳಿ ಬರೆಯುತ್ತೇನೋ ..
ನಿನ್ನ ಮೇಲಿನ ಪ್ರೀತಿ ವ್ಯಕ್ತ ಪಡಿಸುತ್ತೇನೋ .. ಗೊತ್ತಿಲ್ಲ .....
ಆದರೆ ನಿನ್ನ ನೋಯಿಸುವ ಉದ್ದೇಶವಂತೂ ಖಂಡಿತ ಇಲ್ಲ ....
ಈಗೆ ಗೀಚಿದಾಗಲೆಲ್ಲ .. ಮನಸ್ಸು ಹಗುರಾಗುತ್ತದೆ ...
ನಿನ್ನ ಹಣೆಗೆ ಮುತ್ತು ಇಟ್ಟಸ್ತೆ ...ಸಂಭ್ರಮವಾಗುತ್ತದೆ ......... :) :)






ಯಾರೋ ಸಾದನೆ ಮಾಡಿರುವವನ ಕೈ ಇಡಿಯುವ ಅಸೆ ನಿನ್ನದಾದರೆ ..
ನೀ ಸಾದಿಸಿದ್ದಾದರು ಏನು ?
ಅದು ಹೋಗಲಿ .. ಅವನ ಸಾದನೆಯ ಹಾದಿಯಲ್ಲಿ ನಿನ್ನ ಹೆಜ್ಜೆಗಳೇಷ್ಟು ... ನಿನ್ನ ಪಾಲೆಸ್ಟು ???
hmmm ಯಾರದೋ ಸಾದನೆಗೆ ಜೋತು ಬೀಳುವ ಅಸೆ ನಿನಗೇಕೆ ??





ನಿನ್ನ ಮನಸಿನಲ್ಲಿರುವ ಬಹುದೊಡ್ಡ ಬೇಡಿಕೆಗಳು ,, ನನ್ನ ಪ್ರೀತಿಯನ್ನ ಮರೆ ಮಾಡಿವೆ ..
ಬೇಡಿಕೆಗಳ ಪಟ್ಟಿಯನೊಮ್ಮೆ ಸರಿಸಿ ನೋಡು ,,,
ನಿನ್ನ ಮನಸ್ಸು ನನ್ನ ಪ್ರೀತಿಸುತ್ತಿರುತ್ತದೆ .... ಆದರೆ ನನ್ನದಲ್ಲ ....



I Just Stopped Loving You ?? :) :) Hope 99.9 %
(0.1 % ನಿನ್ನ ಮೇಲೆ ನನಗೆ ಕರುಣೆ ಅಸ್ಟೇ .....)
ಕಾರಣ ಇಸ್ಟೇ ... ನೀ ನನ್ನ ಇಂದನ್ನು ಒಪ್ಪಿಕೊಳ್ಳಲು ಸಿದ್ದಳಿಲ್ಲ ....... ನನಗೇ ಅರಿಯದ ನಾಳೆ ಎದುರು ನೋಡುತ್ತಿರುವೆ ....
I just Hate those thoughts ... ನಿನ್ನನ್ನಲ್ಲ , ನಿನ್ನ ಮನಸನಲ್ಲ :):)



ನನ್ನ ನಗು ಮಾಯವಾಗಿ .. ನನ್ನ ಜೀವನದಲ್ಲಿ ಮುಂದೆ ಏನು ? ಎಂಬ ಪರಿಸ್ಥಿಯಲ್ಲಿದ್ದಾಗ ದೊರಕಿದ್ದು ನೀನು ...
ಆಗಲೇ ನನ್ನ ಆಸೆ ಕನಸುಗಳು ಚಿಗುರಿದ್ದು .. ನನ್ನ ಮುಖದ ತುಂಬಾ ನಗು ತೇಲುವನ್ತಾಗಿದ್ದು ..
ಬಾಳಿನ ದಾರಿಯಲ್ಲಿ ನಿನ್ನ ಸರಿಸಮಾನವಾಗಿ ಬೆಳೆದು .. ನಿನ್ನೊಂದಿಗೆ ಬೆಳೆಯುತ್ತಲೇ ಸಾಗಬೇಕೆನ್ದುಕೊಂಡೆ ..
ಆದರೆ ದೇವರಿಗೆ ನನ್ನ ನಗು ಮುಖ ಇಷ್ಟವಾಗಲಿಲ್ಲವೇನೋ .. ಅವ ದಾರಿ ತುಂಬೆಲ್ಲಾ ಕವಲು ದಾರಿಗಳನಿಟ್ಟ ...


"ನೀನಿದ್ದ ಕನಸುಗಳು"

ನನ್ನ ಪುಟ್ಟ ಪುಟ್ಟ ಕನಸುಗಳು ನನಸಾದಾಗ
ನನ್ನ ಅಪ್ಪ - ಅಮ್ಮ ಹಾಗು ಗೆಳೆಯರ ಜೊತೆ
ನೀನು ಇದ್ದೆ ಎಂದುಕೊಂಡೆ .,
ಆದರೆ ನಾ ಹಿಂದೆ ತಿರುಗಿದಾಗಲೇ ಅರಿವಾದದ್ದು
ನೀನಿದ್ದ ಅಸ್ಟೂ ಕನಸುಗಳು ಇನ್ನೂ., Still :)
ಕನಸಾಗಿಯೇ ಇವೆಯೆಂದು !!!




" ದೊಡ್ಡ ಕಾರಣ "
ನನ್ನ /ನಿನ್ನ ಮೇಲಿನ ಪ್ರೀತಿಯನ್ನ ನಿನ್ನ ಮುಂದೆ ಬಿಚ್ಚಿ ಇಡಬೇಕೆಂಬ ಹಂಬಲ .,
ಆದರೆ ಮನದಲ್ಲೇನೋ ತಳ - ಮಳ ., :)
ನಿನ್ನ ಮೇಲಿನ ಬಯಕ್ಕಲ್ಲ ,
ನಿನ್ನ ಸ್ನೇಹವನ್ನು ಕಳೆದುಕೊಳ್ಳುತ್ತೇನೆ ಎಂಬ ಅಂಜಿಕೆ ಇಂದಲ್ಲ .,
ನನ್ನ ಮೇಲೆ ನೀನಿಟ್ಟಿರುವ ಅಭಿಮಾನ,ಅಕ್ಕರೆ,ಸಹಾನುಭೂತಿ
ಎಲ್ಲಿ ಕರುಗುತ್ತದೋ ಎಂಬ " ದೊಡ್ಡ ಕಾರಣಕ್ಕೆ" !!!!




--

ಚಾರ್ಲಿ ... ಭಾವನೆಗಳಿಗೆ ಬಣ್ಣ ಕೊಡುವ ಆಸೆ ನನಗಿಲ್ಲ ... ಭಾವನೆಗಳನ್ನ ವ್ಯಕ್ತ ಪಡಿಸುವಾಸೆ ...... ಅಸ್ಟೆ !!

Saturday, March 14, 2009

ನನಗೇ ಮುಜುಗರ ಉಂಟು ಮಾಡಿದ " ReBorn FUN@TIC$"


ಇಲ್ಲಿರುವ ಪ್ರತಿಯೊಬ್ಬರ ಮನಸನ್ನ ಅವರಿಗಿಂತ ನಿನೇ ತುಂಬಾ ಚೆನ್ನಾಗಿ ಅರಿತ್ತಿದೀ .
ಅವರ ಆಗು - ಹೋಗುಗಳ , ಅಸೆ ಕನಸುಗಳ ಬಗ್ಗೆ Ph.D ಮಾಡಿದ್ದೀ ...
ಆಗಿದ್ದರೂ ಎಲ್ಲರನ್ನೂ ನಿನ್ನ ಸೊಂಟಕ್ಕೆ ಕಟ್ಟಿಕೊಂಡು ಎಳೆಯುವ ಪ್ರಯತ್ನವಾದರೂ ಏಕೆ ??...
ಎತ್ತಣ ನಿನ್ನ ಕನಸು ... ಎತ್ತಣ ಅವರ ಕನಸು .. ಎತ್ತನದಿಂದೆತ್ತ ಸಂಭದವಯ್ಯ ಜೋಗಯ್ಯ ..... ?



ಗೆಳೆಯ ಅ ನೋವಿನ Good Bye ನ ಅವಶ್ಯಕತೆಯಿಲ್ಲ ...
ಎಲ್ಲರೂ ನಿನ್ನ ಕನಸಿಗೆ - ಭಾವನೆಗಳಿಗೆ ಬೆನ್ನು ಕೊಡಲು ..

ನಿನ್ನ ಸಾದನೆ ಯಾದರು ಏನು ?
ಸಮಾಜದಲ್ಲಿ ನೀನು ಗಳಿಸಿರುವ ಹೆಸರಾದರು ಏನು ?
ಮೇಲಾಗಿ ನಿನ್ನ ಗಳಿಕೆ - ಕೂಡಿಕೆ ಎಷ್ಟು ?
ಒಮ್ಮೆ ನೀ ಸಾದಿಸಿ ನೋಡು .. ಗಳಿಸಿ ಕೂಡಿಸಿ ನೋಡು ...
ಇಲ್ಲಿಯ ಪೂರ್ತಿ ಚಿತ್ರಣವೇ ಅದಲು ಬದಲು ...

@@@@@@@ ಜೋಗಯ್ಯ @@@@@@@ Almost 3 ವರ್ಷದ ninna ಎಳೆದಾಟಕ್ಕೆ ತೆರೆಯೇ ..... ??



ಅದೊಂದು ಕಾಲ ಆಗ ಬರೀ ಸಂತೋಷದ ಹೊಳೆ .,
ಸುತ್ತಲೂ ಸ್ವಾರ್ತವಿಲ್ಲದ ಮನಸುಗಳೇ ..

ತದನಂತರದ ಕಾಲ ಆಗ ಬರೀ ಸೂತಕದ ಛಾಯೆ .
ಸುತ್ತಲೂ ಸ್ವಾರ್ತ ತುಂಬಿದ ಮನಸುಗಳೇ .,

ಈಗ ಕಾಲ ಬದಲಾಗಿದೆಯೇ ... ??
ಮತ್ತೆ ಅ ಕಾಲದ ಸಂತೋಷದ ಹೊಳೆ ಹರಿವುದೇ .. ??


ನಾನೆ ಗೀಚಿದ್ದ ಈ ಮೇಲಿನ ಸಾಲುಗಳು ... ., ಇವುಗಳಿಗೆ ಈಗ ಅರ್ಥವಿದೆಯೇ ? ಇಲ್ಲ!!
ನಾನೆ ತಲೆ ತಗ್ಗಿಸಿರುವೆ ., ನಿಮ್ಮ ಈ ಒಗ್ಗಟ್ಟಿಗೆ ., !!!!




" ಎಲ್ಲರಂತ ಸ್ವಾರ್ಥ ಸಾಧನೆ ನಿಮಗೆ ಬೇಡ .,
ಎಲ್ಲರಂತ ನೀತಿಗೆಟ್ಟ ಬದುಕು ನಿಮಗೆ ಬೇಡ .,
ಎಲ್ಲರಂತ ವ್ಯರ್ಥ ಸಾವು ನಿಮಗೆ ಬೇಡ .,
ನಾಲ್ಕು ಜನರ ನೆಮ್ಮದಿ ಬದುಕಿಗಾಗಿ ಹಾಗು
ಸಮಾಜದ ಒಳಿತಿಗಾಗಿ ಮುನ್ನಡೆಯಿರಿ .,
ಸಾಧನೆಯ ಕೀರಿಟವನ್ನೊತ್ತು ಅಮರರಾಗಿ " ..



ಇಲ್ಲಿಯ ಪ್ರತಿಯೊಬ್ಬರ ಕನಸು - ಎಲ್ಲರ ಶ್ರಮ, ಒಗ್ಗಟಿನ ಕೆಲಸದಿಂದ ಹಿಡೇರಲಿ .,
ಎಂದು ಆಶಿಸುವ

ನಿಮ್ಮ ನೆಲ್ಮೆಯ
ಚಾರ್ಲಿ ... ಸದಾ ನಿಮ್ಮೊಂದಿಗೆ !!