Friday, November 13, 2009

ಅಂದೇ ನಮ್ಮನ್ನ ಅಗಲಿದರೂ, ಇನ್ನೂ ನಮ್ಮೊಂದಿಗಿರುವ ಚೈತನ್ಯ .,

ಕರುನಾಡ ಕಣ್ಮಣಿ ... ಯುವಕರ ಆಶಾಕಿರಣ .. ಅಂದೇ ನಮ್ಮನ್ನ ಅಗಲಿದರೂ ಇನ್ನೂ ನಮ್ಮೊಂದಿಗಿರುವ ಚೈತನ್ಯ .,



ಶಂಕರನಾಗ್ ...(ನಮ್ಮೊಂದಿಗಿಲ್ಲ ಎನ್ನುವ ಭಾವನೆ ನನ್ನಲ್ಲಿ ಇಲ್ಲ ., ನನ್ನಂತ ಸಾವಿರಾರು ಅಭಿಮಾನಿಗಳಲ್ಲೂ ಇಲ್ಲ )





ಅವರ ನೆನಪ್ಪನ್ನ ಅಮರವಾಗಿಸಲು ., ಯಾವುದೇ ಪ್ರಯತ್ನ ಬೇಕಿಲ್ಲ., ಅವರ ಅಂದಿನ ಹೊಸ ಪ್ರಯೋಗಗಳು ., ಕಲಾತ್ಮಕ ಹಾಗು ಅಭಿರುಚಿಯ ಕೆಲಸಗಳು ಇನ್ನೂ ನಮ್ಮೊಂದಿಗಿವೆ ., ಮುಂದೆಯುs ನಮ್ಮ ತಲೆ ಕಾಯುತ್ತವೆ ...



ಆದರೂ ಅವರ ಹಿಂದಿನ ಬದುಕನ್ನ ಅವರ ಕನಸುಗಳನ್ನ ಮುಂದಿನ ಪೀಳಿಗೆಗೆ ಬಿತ್ತರಿಸಲು ರಂಗಶಂಕರ , ಬೆಂಗಳೂರು., ಶಂಕರನಾಗ್ ಅವರ ಜನ್ಮ ದಿನದಂದು (ನವಂಬರ್ ೯ ) ಅವರ ವೆಬ್ ಸೈಟ್ ಆರಂಭಿಸಿದೆ ., http://www.shankarnag.in/ಒಮ್ಮೆ ಕಣ್ಣಾಯಿಸಿ ..



ಖಂಡಿತ ಶಂಕರ್ ನಿಮ್ಮ ಕಣ್ಣಂಚಲ್ಲಿ ಹನಿಯಾಗಿ ಮೂsಡುತ್ತಾರೆ .,



ರಂಗಶಂಕರದ ಪ್ರತಿ ಕತೃವಿಗೆ ... ಹಾಗು ಶಂಕರ್ ಅವರ ಪ್ರತಿ ಕನಸನ್ನ ಸಾಕಾರಗೊಳಿಸಲು ಸದಾ ಕಾರ್ಯಪ್ರವೃತ್ತರಾಗಿರುವ ತಾಯಿ ಅರುಂದತಿನಾಗ್ ರವರಿಗೆ ವಂದಿಸಲೇಬೇಕು ಎಂಬ ಭಾವನೆ ಹುಟ್ಟುತ್ತೆ .,



ಶಂಕರ್ ಅವರ ಅಸ್ಟೂ ಕನಸು ನನಸಾಗಲಿ ಎಂದೂ ಬೇಡುತ್ತಾ ., http://www.shankarnag.in/ ತಪ್ಪದೆ ಲಿಂಕ್ ನೋಡಿ .,



ಸಾದ್ಯವಾದರೆ ಜೆ ಪಿ ನಗರದ ರಂಗಶಂಕರಕ್ಕೆ ಹೋಗಿ ಬನ್ನಿ ., ಸದಾ ಒಂದಲ್ಲ ಒಂದು ಕಾರ್ಯಕ್ರಮದೊಂದಿಗೆ ಬ್ಯುಸಿ ಇರುವ ನೆಚ್ಚಿನ ತಾಣವದು .,



Have a look at :-http://www.rangashankara.org/home/rangatest/

1 comment:

Manshi Tech said...

Nice article.. really interesting