Thursday, April 30, 2009

ಅ ಎರಡು ಬೆಸುಗೆಗಳು ., ಜೊತೆಗೆ ಒಂದಿಸ್ಟು ಅವಲೋಕನ !!!!

April 19 ಹಾಗು 20 ನನ್ನ ಜೀವನದ ಅತಿ ಮಧುರ ದಿನಗಳು ...

ನನ್ನ Engineering Daysನ Best Friend Pavani ಹಾಗು ಲೇಟಾಗಿ ಸಿಕ್ರು Latest ಆಗಿ ಸಿಕ್ಕ Patil ಮದ್ವೆ.

ವಿಧಿ ಬರಹ ಇಬ್ಬರ ಮದ್ವೆ ಒಂದೇ ಡೇಟ್ ಅಲ್ಲಿ Clash ಆಗಿತ್ತು ., ಇದು ನಮಗೆ ತುಂಬಾ ಬೇಸರ ತರಿಸಿತ್ತು .,
Patil ಮದ್ವೆಗೆ Trip ತರ plan ಮಾಡಿ Big Team ಹೋಗಬೇಕು ಎನ್ನೋ ಕೆಲ ಗೆಳೆಯರ Plan ಫೈಲ್ ಆಯ್ತು.
ಏನೂ ಮಾಡುವ ಆಗಿಲ್ಲ ನಮ್ಮ ಜೀವನದಲ್ಲಿ ನಾವು ಕಂಡ ಬಲು ಅಪರೂಪದ ವ್ಯಕ್ತಿಗಳು ಅಂದ್ರೆ ಪಾವನಿ ಹಾಗು ಪಾಟೀಲ್ .,
ಇಬ್ಬರು ನೋಡೋಕೆ ಒಂದೇ ಸೈಜ್ ಆದ್ರು :) ಪಾವನಿ ಬೆಳ್ಗೆ ಪಾಟೀಲ್ ನನ್ನಾಗೆ ಕರ್ರಗೆ :) :) ಆದರೆ ಇಬ್ಬರೂ ವಿಶಾಲ ಹೃದಯದವರು,ತುಂಬಾ ಆತ್ಮೀಯರು ಸಹ ಹೌದು ...ಹೀಗಾಗಿ ಇಬ್ಬರ ಮದುವೆಗೆ ಹೋಗಲೇಬೇಕಾದ ಪರಿಸ್ಥಿತಿ..

ಪಾವನಿ ಮದ್ವೆ ಬೆಂಗಳೂರಿನ ವಿಜಯನಗರದಲ್ಲಿ ., ಪಾಟೀಲ್ದು ದೂರದ ರಾಯಚೂರು ಜಿಲ್ಲೆಯ ಗೂಗಲ್ ನಲ್ಲಿ .
ಅಂತು ಇಂತೂ ಗೆಳೆಯರ ಜೊತೆ ಕೂತು ಮಾತನಾಡಿ ಎರಡು ಮದುವೆಗೆ ಹೋಗೋ ಬ್ಲೂ ಪ್ರಿಂಟ್ ರೆಡಿ ಮಾಡಿದ್ವಿ ... ದೂರದ ರಾಯಚೂರಿಗೆ ಹೊರಟದ್ದು ರಾಜೇಶ್ , ರಾಕೇಶ್ , ಸತೀಶ್ ಹಾಗು ನಾನು ಮಾತ್ರ .,ಮಿಕ್ಕಂತೆ ಎಲ್ಲರು ಕೈ ಕೊಟ್ರು .. ಚಿತ್ರ ವಿಚಿತ್ರವಾಗಿ ಕಾರಣ ಕೊಟ್ಟು ಬರೋಲ್ಲ ಅಂದ್ರು !!!!.,

ನಾಲ್ಕು ಜನ ಮಾತನಾಡಿ April 19 ರಾತ್ರಿ ಪಾವನಿ ಮದ್ವೆ Reception ಗೆ ಹೋಗೋದು April 20 ಸೋಮವಾರ ಆಫೀಸ್ ಗೆ ರಜ ಹಾಕಿ ಪಾಟೀಲ್ ಮದ್ವೆಗೆ ಹೋಗೋ ಪ್ಲಾನ್ ಮಾಡಿದ್ವಿ. ಎಂದಿನಂತೆ ನಮ್ಮ ರಾಜೇಶ್ ಟಿಕೆಟ್ ಬುಕ್ ಮಾಡಿಸಿದ (ಇ ಬಾರಿ ಟ್ರೈನ್ ಪ್ರಯಾಣ : ಹಂಪಿ Express) .. [ರಿಟರ್ನ್ ಟಿಕೆಟ್ ಸಹ ಮಾಡಿಸಿಬಿಟ್ಟ 20 ದಿನ ಮುಂಚೆನೇ :) ] ...

April 19th :
ರಾತ್ರಿ 7.30ರ ಸುಮಾರಿಗೆ ಎಲ್ಲರೂ ಪಾವನಿ ಮದ್ವೆ Receptionಗೆ ಹೋದ್ವಿ .,As Expected FUN@TICS Full Gang ಅಲ್ಲಿ ಇತ್ತು ., ಆದ್ರೆ ನ Expect ಮಾಡಿದ Ambedkar College Friends ಹಾಗು SBMSIT Friends ಬಂದಿರಲಿಲ್ಲ .,ಇದಕ್ಕೆ ಪಾವನಿ Negligency ನೇ ದೊಡ್ಡ ಕಾರಣ .,ಎಲ್ಲರಿಗೂ ಮೇಲ್ ಹಾಕಿ ಕರೆದರೆ ಸಾಕು ಎಲ್ಲ ಬರ್ತಾರೆ ಎಂಬ Feel Workout ಆಗಿರಲಿಲ್ಲ .,
ಅಲ್ಲಿ ಇದ್ದದ್ದು Team FUN@TICS ಬಿಟ್ರೆ 2-3 other Friends ಅಸ್ಟೆ ..

ಮನುಷ್ಯ ಎಸ್ಟೇ ಬೆಳೆದ್ರೂ ಸ್ನೇಹದ ಮುಂದೆ ಚಿಕ್ಕವನೇ ........
ನಾವು ಹೇಗೆ ನಮ್ಮ ಮೂsಗಿನ ನೇರಕ್ಕೆ ನೋಡಿ ನೆಡೆಯುತ್ತೇವೋ .. ಬೇರೆಯವರೂ ಹಾಗೆ ...
ಪ್ರೀತಿ ವಿಶ್ವಾಸ ನಾವು ತೋರಿಸಿದಸ್ಟು ನಮಗದು ವಾಪಾಸ್ ದೊರೆಯುತ್ತೆ ..ಇಲ್ಲವಾದರೆ ಏನೂ ಇಲ್ಲ ... !!! ನಮ್ಮ ಬಾಳು ಖಾಲಿ ಖಾಲಿ ...!!

ಬಿಟ್ಟಾಕಿ Blade ಶುರುಮಾಡಿದರೆ Never Ending Story ಆಗಿಬಿಡುತ್ತೆ ..
ಎಲ್ಲ ಅವರರವರ ಬಾವಕ್ಕೆ ಬಿಟ್ಟುಬಿಡೋಣ ... ಕರೆದರೆ ಊಟಕ್ಕೆ ಹೋಗಿ ಬರೋಣ ... :)

ಎಲ್ಲರೊಂದಿಗೆ ಪಾವನಿ ಮದ್ವೆ Reception Enjoy ಮಾಡಿದ್ವಿ ..ಪಾವನಿ ಹಾಗು ವೆಂಕಟೇಶ್ ಬಾಬುರವರಿಗೆ Wish ಮಾಡಿ ... ಎಲ್ಲ ಗೆಳೆಯರನ್ನ ಮೊದಲು ಚೌಲ್ಟ್ರಿ ಇಂದ ಕಳಿಸಿ ಕೊನೆಗೆ ರಾಖಿ , ರಾಜೇಶ್ , ಸತಿ ಹಾಗು ನಾನು Yeshwanthpura Railway Stationಗೆ ಹೊರೆಟ್ವಿ .,




Sorry I missed a Great Part of April 19th Evening :- Here I Go...

Team FUN@TICSನ ಎಲ್ಲಾರು Plan ಮಾಡಿ (Areawise)ಮದ್ವೆಗೆ ಬರುವಲ್ಲಿದ್ದರು :) ..
Mathikere/BEL Surrounding Team Santosh C ನ ಕಾರಲ್ಲಿ .

ನಾನು ,ರವಿ,ರಾಖಿ ,ರಾಜೇಶ್ ಹಾಗು ಸತಿ ವಿಜಯನಗರ ದಿಂದ ಆಟೋನಲ್ಲಿ ಅನ್ನೋ ಪ್ಲಾನ್ ...

ಪಾವನಿಗೆ ಗಿಫ್ಟ್ ತಂದು ಆಗಿತ್ತು ಆದರೆ ಪಾಟೀಲ್ ಗೆ ಇಲ್ಲ ... ಇದು ಗೊತ್ತಾಗಿದ್ದು Dec 19th ಸಂಜೆ ,,

ಸರಿ ರಾಜೇಶ್ ನಾನೇ ಮಲ್ಲೇಶ್ವರಂಗೆ ಹೋಗಿ ತರ್ತೀನಿ ಅಂದ ., ರಾಖಿ Apache ಬಿಟ್ರೆ ಬೇರೆ ಏನನ್ನ ಕೇಳಲಿಲ್ಲ, ಯಾರನ್ನು ಕರೆಯಲಿಲ್ಲ ., ನಮಗೂ ಖುಷಿ ಆಯಿತು., ಸದ್ಯ ಬಚಾವ್ ಅಂದುಕೊಂಡು ಮದ್ವೆಗೆ ಹೋದ್ವಿ .,. (ರಾಜೇಶ್ ಗಾಡಿಲ್ಲಿ ಸೀದ ಚೌಲ್ಟ್ರಿ ಗೆ ಬರ್ತೀನಿ ಅಂದ ) .,

ನಾವೆಲ್ಲ ಚೌಲ್ಟ್ರಿಗೆ ಬಂದ್ವಿ ಇನ್ನ ನಮ್ಮ ರಾಜೇಶ್ ಬಂದಿಲ್ಲ ., ಆಮೇಲೆ ಶ್ವೇತ ಹೇಳಿದ ಮೇಲೆ ಸತ್ಯ ದರ್ಶನವಾಯ್ತು .. ಸ್ವಲ್ಪ ಶಾಕ್ .. ತುಂಬಾ ಜೋರ್ ನಗು .,ಒಂತರಾ ಅನುಭವ ಆಗ ... :)

ಹೋಗ್ಲಿ ಬಿಡು ಹುಡುಗ ಆರಾಮಾಗಿ ಇರ್ಲಿ ಅಂತ ಬಿಟ್ವಿ ಅವನು ಬಂದಾಗ ,, ಏಕೆಂದರೆ ಸತ್ಯ ಆಮೇಲೆ ನಮಗೆ ಏಳ್ತಾನೆ ಅಂತ ಗೊತ್ತಿತ್ತು .. SO :) ಬಿಟ್ ಬಿಟ್ವಿ :) ಆಗ ... :)

ಇಂತಿಷ್ಟು ಕತೆಗಳನ್ನ ಮುಗಿಸಿ ., ರೈಲ್ವೆ ಸ್ಟೇಷನ್ ಗೆ ಬಂದ್ವಿ ., Platform Entry ಆಗುತ್ತಿದ್ದಾಗೆ ಜೋರ್ ಮಳೆ ..ಜೊತೆಗೆ ನಮ್ಮ ರಾಜೇಶನ ಸತ್ಯ ಹೊರಬಿಳೋಕೆ ಶುರುವಾಯ್ತು ..
ರಾಜೇಶ್ Dec 18th Evening ನಡೆದ ಹಾಗು Dec 19th Morning ನಡೆದ ಎಲ್ಲ ವಿಚಾರಗಳನ್ನ Reveal ಮಾಡ್ತಾ ಇದ್ದ ., ಹುಡುಗ Dull ಆಗಿರಲಿಲ್ಲ ., ನಾವು ತುಂಬಾನೇ ರೆಗಸ್ತ ಇದ್ವಿ .. ಕೊನೆ ಕೊನೆಗೆ ತುಂಬಾನೇ ಬೇಜಾರ ಆಗ್ತಾ ಇತ್ತು ಅವನ ಮಾತುಗಳಿಂದ ., ನನ್ನ ಕತ್ತು ಮಾತ್ರ ಉ: ಅಂತಿತ್ತು ಮನಸ್ಸು ಮಾತ್ರ ಕೊರಗುತ್ತಿತ್ತು ..ಇದ್ನೆಲ್ಲಾ ಕೇಳದೆ ಇರ್ಲಿ ಅಂತಾನೆ ಮಳೆ ಜೋರ್ ಬರ್ತಿತ್ತಾ ?? ಎನ್ನೋ ಗೊತ್ತಿಲ್ಲ ., ಮಳೆ ಶಬ್ದದಲ್ಲಿ ಕೆಲ ಬೇಡದ ವಿಷಯಗಳು ತೇಲಿಹೋದವು .. ನನ್ನ ತಲೆ ಮನಸಿಗೆ ತಲುಪಲೇ ಇಲ್ಲ ...ಇದು ಅವನ ಅರಿವಿಗೂ ಬಂದಿತ್ತು ಚಾರ್ಲಿ ಒಳಗೊಳಗೇ ಬೈತಾ ಇದಾನೆ ಅಂತಿದ್ದ ... ಪದೇ ಪದೇ ... ಖಂಡಿತ ಇಲ್ಲ ರಾಜೇಶ್ .. ನಾನ್ ಸರಿ ಇದ್ದರೆ ಅಲ್ವ ನಾನ್ ನಿನಗೆ ಬೈಯೋಕೆ :) :)

" ಆದ್ರೂ ಎರಡು ಮಾತು ... ಭಾವನೆಗಳಿಗೆ ಬೆಲೆಕೊಟ್ಟರೆ ಸಾಲದು ... ಭಾವನೆಗಳಿಗೆ Practical Touch ಕೊಡ್ಬೇಕು ., :) Much Happy this time ., you are Quite strong this time .... you are with same josh " Thanks for that :) :) Keep it up :)

Hmmmmmm ಹೀಗೆ ಅದು ಇದು ಕಿತ್ತೊಗಿದ್ದು ., ಕಿತ್ತೊಗ್ಬೇಕಿರೋ Topic ನ ಎತ್ಕೊಂಡು ತುಂಬಾನೇ Enjoy ಮಾಡಿದ್ವಿ ನಾಲ್ಕು ಜನ ,,, 11 Pm ಗೆ ಬಂದ ಹಂಪಿ Express ಹತ್ತಿ ರಾಯಚೂರ್ ಪ್ರಯಾಣ ಶುರು ಮಾಡಿದ್ವಿ ...

April 20th

ಬೆಳಗ್ಗೆ 8ಕ್ಕೆ ಎದ್ವಿ ಟ್ರೈನ್ ನಲ್ಲಿ .., ಆನ್ ದಿ ವೇ ಸಿಕ್ಕ ಮಂತ್ರಾಲಯದಲ್ಲಿ ರಾಯರಿಗೆ ನಮಿಸಿ ಹಾಗೆ ಮುಂದೆ ಪ್ರಯಾಣ ಬೆಳೆಸಿದ್ವಿ .,
ಎಲ್ಲರ ಮುsಡ್ ತುಂಬಾನೇ ಚೆನ್ನಾಗಿತ್ತು ತುಂಬಾನೇ ಎಂಜಾಯ್ ಮಾಡ್ತಾ ಇದ್ವಿ ., ಆದ್ರೆ ಅಲ್ಲಿಗೆ ಬಂದ ಅವನು ಅಲ್ಲದ , ಅವಳು ಅಲ್ಲದ "ಅದು" ತುಂಬಾನೇ ತಲೆ ತಿಂತು ಎಲ್ಲರ್ಗೂ 10-10ರೂ Blade ಹಾಕಿ ಎಲ್ಲರ್ಗೂ ಉರ್ಸಿ ಓಯ್ತು ., ನಮ್ಮ ಮುsಡ್ ಹಾಳಾಗಿ ಹೋಯ್ತು ..ಎಲ್ಲರು "ಅದಕ್ಕೆ" ಬೈಯುತ್ತಲೇ ರಾಯಚೂರ್ ತಲುಪಿದ್ವಿ .,9.30ಕ್ಕೆ .

20th April 2009 "ರಾಯಚೂರ್ ಬಂದ್ " ನಮ್ಮ ಟೈಮ್ ಸರಿ ಇಲ್ಲ ಅಂತ ಟ್ರೈನಲ್ಲಿ "ಅದು" ಸಿಕ್ಕಾಗಲೇ ಅರಿವಿಗೆ ಬಂದಿತ್ತು .. ರಾಯಚೂರ್ ಸಿಟಿಗೆ ಎಂಟ್ರಿ ಕೊಟ್ಟ ಮೇಲೆ ಅದರ ಪೂರ್ತಿ ಚಿತ್ರಣ ಸಿಕ್ತು .,
ಪುಣ್ಯಕ್ಕೆ ಪಾಟೀಲ್ ಲಾಡ್ಜ್ ಬುಕ್ ಮಾಡಿದ್ದ .,
ಗಂಟೆ 10ಕ್ಕೆ ರಾಯಚೂರಿನ ಬಿಸಿಲು 34^ C ಇತ್ತು ., ಸ್ವಲ್ಪ ಕಷ್ಟ ಪಟ್ಟೆ ಲಾಡ್ಜ್ ಹುಡುಕಿ ., ಹಿಂದಿನ ಬಾಗಿಲಿನಿಂದ ಎಂಟ್ರಿ ಕೊಟ್ವಿ(ಬಂದ್ ನಿಂದಾಗಿ ಎಲ್ಲ ಅಂಗಡಿ -ಮುಗ್ಗಟ್ಟುಗಳು ಮುಚ್ಚಿದ್ದವು.... ) ., AC ರೂಂ ಆಗಿದ್ದರಿಂದ ಎಲ್ಲರು ಕೂಲ್ ಅದ್ವಿ ., ಎಲ್ಲ ಬೇಗ ಫ್ರೆಶ್ ಆಗಿ ತಿಂಡಿ ಹುಡುಕಿದ್ವಿ., ಬಂದ್ ಇಂದಾಗಿ ಏನು ಸಿಗ್ಲಿಲ್ಲ .. ಅಲ್ಲೇ ಕಬ್ಬಿನ ಹಾಲು ಕುಡಿದು ಪಾಟೀಲ್ ಮದುವೆ ಜಾಗಕ್ಕೆ ಹೊರೆಟ್ವಿ .,

ಪಾಟೀಲ್ ಮದ್ವೆ ಇದದ್ದು ರಾಯಚೂರಿನಿಂದ 60 ಕಿ ಮೀ ದೂರದ ಗೂಗಲ್ ನಲ್ಲಿ .... ಅಲ್ಲಿಗೆ ತಲುಪೋಕೆ ಪಾಟೀಲ್ ಕಾರ್ ಸಹ ಬುಕ್ ಮಾಡಿದ್ದ ., ಅವನು ಮಾಡಿದ ಎಲ್ಲ ವ್ಯವಸ್ಥೆಗಳ ಬಗ್ಗೆ ರಾಜೇಶ್ ತುಂಬಾ ಹೊಗಳ್ತಾ ಇದ್ದ ., ನಮಗೂ ಖುಷಿ ಇತ್ತು .,
ರಾಯಚೂರ್ ಬಂದ್ ಇದ್ದ ಕಾರಣ ಕಾರ್ ನ ಡ್ರೈವರ್ ಸಿಟಿ ಒಳಗೆ ಬರೋಕೆ ತುಂಬಾ ಬಯ ಪಟ್ಟ ., ನಮ್ಮ ರಾಜೇಶ್ ಅವನನ್ನ Convince ಮಾಡಿ ., ಸಿಟಿ ಹೊರಗೆ ಬರೊ ತರ ಮಾಡಿದ ... ನಾವೆಲ್ಲ ಆಟೋ ಇಡಿದು ಸಿಟಿಯಿಂದ ಆಚೆ ಬಂದ್ವಿ ., ಅಲ್ಲಿಂದ ಮತ್ತೆ ಓಪನ್ ಆಟೋ ನಲ್ಲಿ 10 KM ಮುಂದೆ ಮದ್ವೆ ., ಅಲ್ಲಿಗೆ ಬಂದ ಕಾರ್ ಇಡಿದು ಗೂಗಲ್ ಕಡೆ ಹೊರೆಟ್ವಿ.,

ಅಲ್ಲಿನ ರೋಡ್ ತುಂಬಾನೇ ಚೆನ್ನಾಗಿತ್ತು .. ಅಲ್ಲಲ್ಲಿ ಸ್ವಲ್ಪ ಮಾತ್ರ ಕಿತ್ತೋಗಿತ್ತು ..... ಏಗೋ ನಮ್ಮ ಕಾರ್ ಡ್ರೈವರ್ " ಸ್ವಾಮಿ" ಮಧ್ಯಾಹ್ನ 1 ಗಂಟೆಗೆ ಗೂಗಲ್ ನಲ್ಲಿ ಬಿಟ್ರು .,

ಎಲ್ಲರ್ಗೂ ಹೊಟ್ಟೆ ತುಂಬಾನೇ ಹಸಿದಿತ್ತು !! ... ಪಾಟಿಲ್ಗೆ ವಿಶ್ ಮಾಡಿ ಅವರ ಹೆಂಡತಿಗೆ ಗಿಫ್ಟ್ ಕೊಟ್ಟು :)
ಸೀದ ಊಟಕ್ಕೆ ಹೋದ್ವಿ .,

ಭಾರಿ ಭೋಜನ ನಮಗಾಗಿ ಸಿದ್ಧವಿತ್ತು :) :) ಉತ್ತರ ಕರ್ನಾಟಕದ ಅಸ್ಟೂ Varities ಅಲ್ಲಿ ಇತ್ತು .,
"ಹೊಟ್ಟೆ ಹಸಿದಿತ್ತು ., ಆದ್ರೆ ಊಟ ಬಾಳ ಕಾರಿತ್ತು" ಇದು ರಾಜೇಶ್ ಹಾಗೂ ಸತಿ ಉವಾಚ .. ಆದ್ರೆ ನಮ್ಮ ರಾಖಿ ಊಟನ ತುಂಬಾನೇ Enjoy ಮಾಡ್ದ .,
Except Rakhi ನಮಗ್ಯಾರಿಗೂ ಊಟ ಸರಿ ಹೋಗಲಿಲ್ಲ ... ನೀರು ಕುಡಿದು ತೃಪ್ತಿ ಪಡೋಣ ಅಂದ್ರೆ ., ಅಲ್ಲಿನ ನೀರನ್ನ ಕುಡಿಯುವ ಮನಸ್ಸಿರಲಿಲ್ಲ ...
"ಪಕ್ಕದಲ್ಲೇ ಇದ್ದ ತುಂಗೆಯ ನೀರೆ ಎಲ್ಲದಕ್ಕೂ !!!" ವಿಧಿಯಿಲ್ಲದೆ ಊಟದ ಮಧ್ಯೆ ಅದೇ ನೀರು ಕುಡಿದು ... ಆಚೆ ಬಂದು "Mineral Water" ಕುಡುದ್ವಿ .

"ಸಾರಾಯಿ ಪ್ಯಾಕೆಟ್ ತರ ನೀರನ್ನ 1ರೂ ಗೆ ಮಾರೋ ಜನ .. ವಿಧಿಯಿಲ್ಲದೆ ಅದನ್ನೇ ಕೊಂಡುಕೊಂಡು ಕುಡಿಯೋ ಜನ " Hmmm ತುಂಬಾನೇ ಬೇಜಾರಾಯ್ತು ಅಲ್ಲಿನ ವ್ಯವಸ್ಥೆ ನೋಡಿ .,

ಸಂಜೆ 3.30 ರವರೆಗೆ ಅಲ್ಲಿದ್ದು ..Around 5.30 ಕ್ಕೆ ರಾಯಚೂರಿಗೆ ವಾಪಸ್ ಬಂದ್ವಿ ..Bangaloreಗೆ Return train 7 ಗಂಟೆಗೆ ಇತ್ತು ., ಸ್ವಲ್ಪ City Beat ಹೊಡೆದು 7 ಗಂಟೆಗೆ ಬಂದ ರೈಲ ಏರಿ 21ನೇ ತಾರೀಖು ಬೆಳಗ್ಗೆ ಕ್ಕೆ ಬೆಂಗಳೂರಿಗೆ ವಾಪಾಸ್ ಬಂದ್ವಿ ..,
____________________@@@@@@@@@@@@___________________

ಎಲ್ಲವೂ ಅಂದುಕೊಂಡಂತೆ ನಡೆದಿತ್ತು ., ಆದರೆಲ್ಲೋ ಒಂದು ಕಡೆ ನನ್ನ ಮನಸ್ಸು ತುಂಬಾ ನೊಂದಿತ್ತು ....

ರಾಯಚೂರು ಎಂದಾಕ್ಷಣ ತಲೆಗೆ ಹೊಳೆಯೋದು ಉರಿ ಬಿಸಿಲು ... ನಾವು ಬೇಸಿಗೆಯಲ್ಲೇ ಹೋಗಿದ್ರಿಂದ ಅದರ ಅನುಭವ ಚೆನ್ನಾಗೇ ಇತ್ತು !!
ಅಮ್ಮಮ್ಮಾ ಅಂದ್ರೆ ಬಿಸಿಲು ಬೆವರಿಳಸಬಹುದು ... ಚರ್ಮವನ್ನ ಸ್ವಲ್ಪ ಕಪ್ಪಾಗಿಸಬಹುದು ಎಂದುಕೊಂಡಿದ್ದೆ ., ಆದರೆ ನನ್ನ ಮನಸ್ಸಿಗೂ ಅದರ ಬಿಸಿ ತಲುಪುತ್ತೆ ಅಂತ ಭಾವಿಸಿರಲಿಲ್ಲ .,


ರಾಯಚೂರಿನ ಸುತ್ತಮುತ್ತ ಇರೋ ಊರುಗಳಿಗೆ ಬಸ್ಸಿನ ವ್ಯವಸ್ಥೆ ತಕ್ಕ ಮಟ್ಟಿಗಿದೆ(KSRTC ಬಸ್ಸುಗಳೇ ಸ್ವಲ್ಪ ಜಾಸ್ತಿ ) ., ರೋಡುಗಳು ಪರವಾಗಿಲ್ಲ ., ಆದರೆ ಬಸ್ಸುಗಳಿಗಿಂತ ಅಲ್ಲಿ Jeep,Luggage ಆಟೋಗಳದ್ದೇ ಕಾರುಬಾರು .,

ಅಲ್ಲಿನ ಸುಡುಬಿಸಿಲು ., ಅಲ್ಲಿನ ನೆಲವನ್ನ ನೋಡಿದ್ರೆ ಸಾಕು "ಮಳೆ ಬಂದ್ರೆ ಮಾತ್ರ ಬದುಕು ,ಮಿಕ್ಕಂತೆ ಬರೀ ಬಿಸಿಲ ಧಗೆ " ಅನ್ನೋದು ಎಂತವರಿಗೂ ಅರಿವಿಗೆ ಬರುತ್ತೆ .,

ಈಗಿನ ಮಳೆಗಾಲವೋ ಮಳೆ ಬಂದ್ರೆ ಬಂತು ಇಲ್ಲವಾದಲ್ಲಿ ಹೋಯ್ತು ... ಇ area ಅಲ್ಲಿ ಬಂದ್ರೆ ಪಕ್ಕದ areaದಲ್ಲಿ ಇರೋದೇ ಇಲ್ಲ !!! ಅಲ್ಲಿಯ ಪರಿಸ್ಥಿತಿಯು ಭಿನ್ನವೇನಲ್ಲ !!

ಅಲ್ಲಿಯ ಮಂದಿ ಮಳೆಗಾಲದಲ್ಲಿ ಅಲ್ಲಿದ್ದು , ಮಿಕ್ಕಂತೆ City ಕಡೆ ಗೂಳೆ ಹೋಗೋದೇ ಹೆಚ್ಚು ... ಹೀಗಿರುವಾಗ ಸರ್ಕಾರೀ ಬಸ್ಸುಗಳಿಗೆ ದುಬಾರಿ ಹಣ ಕೊಟ್ಟು ಓಡಾಡೋಕೆ ಆಗುತ್ತಾ .... ????


ಆಗಾಗೆ ಅಲ್ಲಿ Jeep ,Luggauge ಆಟೋಗಳದ್ದೇ ಆಟಾಟೋಪ !!!


ಅಲ್ಲಿನ ಜನರನ್ನ Crazy ಅನ್ನಲೋ ಅಥವಾ ಅವರ ಬಾಳಲ್ಲಿ ಬೇರೆ ಮಾರ್ಗವೇ ಇಲ್ಲ ಎನ್ನಲೋ ತಿಳಿಯುತ್ತಿಲ್ಲ !!Jeep ಅಥವಾ Luggagr ಆಟೋ ಪೂರ್ತಿ ಆಗಿದ್ದರೂ ...ಆಟೋ ಮೇಲೆ ಹಾಗು Jeepನ ಬಿಸಿ Banet ಮೇಲೆ ಕೂತು ಪ್ರಯಾಣ ಮಾಡ್ತಾರೆ ., ಗಂಡಸರು ಹೆಂಗಸರು ಎನ್ನದೆ ಎಲ್ಲರೂ ಅ ಉರಿ ಬಿಸಿಲಿನಲ್ಲೂ Banet ಮೇಲೆ ಕೂತು ಪ್ರಯಾಣ ಮಾಡ್ತಾರೆ ., ಮೊದಲೇ ಕೆಟ್ಟ ಬಿಸಿಲು ., ಅದರಲ್ಲಿ ಅ ಬಿಸಿ Banet ಮೇಲೆ ಕೂತು ಪ್ರಯಾಣ !!! ., ತುಂಬಾನೇ ಬೇಜಾರಾಗ್ತಾ ಇತ್ತು ಅಲ್ಲಿನ ದೃಶ್ಯವಳಿಗಳಿಂದಾಗಿ ....

ಇನ್ನ ಅಲ್ಲಿನ ಶಾಲೆಗಳ ಬಗ್ಗೆ ಹೇಳ್ಬೇಕು ಅಂದ್ರೆ .,
ಕಮ್ಮಿ ಅಂದ್ರೆ ಊರಿಂದ 2 ಕಿ ಮೀ ದೂರ ಇದ್ದ ಶಾಲೆಗಳೇ ಹೆಚ್ಚು ., ಪ್ರೈಮರಿ ಹಾಗು ಮಿಡ್ಲ್ ಸ್ಕೂಲ್ ಮಕ್ಕಳಿಗೆ ತುಂಬಾನೇ ಕಷ್ಟಕರ ವಾತವರಣ ., ಪ್ರೌಢ ಶಾಲೆಯವರಿಗೆ ಸೈಕಲ್(ಸರಕಾರ ಕೊಡುತ್ತಿರುವ) ಇರೋದ್ರಿಂದ ಪರವಾಗಿಲ್ಲ .,
ಎಲ್ಲ ಸರಿ ಇದ್ದೆ ನಾವು ಶಾಲೆಗೆ ಹೋಗಿದ್ದು ನಮಗೆ ತಿಳಿದೇ ಇದೆ ., ಇನ್ನ ಅಲ್ಲಿನ ಪರಿಸ್ತಿತಿ ನೋಡಿದ್ರೆ ಹೇಳಬಹುದು ಶಾಲೆಯ Strength ಎಸ್ಟ್ ಇರುತ್ತೆ ಅಂತ .,

ಅಲ್ಲಿನ ತಾಯಂದಿರು ನಾ ನೋಡಿದಂತೆ .,
ತಲೆ ಮೇಲೆ ಹತ್ತಿ ಗಂಟು ., ಇಲ್ಲ ಬ್ಯಾಡಗಿ ಮೆಣಸಿನಕಾಯಿ ಗಂಟು ., ಅವರ ಬಲಗೈ, ಗಂಟ ಮೇಲೆ ., ಎಡಗೈಯಲ್ಲಿ ತಮ್ಮ ಮಗು ಬೆರಳು ., ಅ ಮಗು ಕೈಯಲ್ಲಿ ಒಂದು ನೀರಿನ ದೊಡ್ಡ ಕ್ಯಾನ್ (ಸಂಜೆ ಆಗಿದ್ರಿಂದ ಖಾಲಿ ಕ್ಯಾನ್ )., ಹಾಗು ಬಿಳಿ ಗಂಟು .,
ಗುಂಪು ಗುಂಪಾಗಿ ಮನೆ ಕಡೆ ಹೊರಟಿದ್ರು ಸಿಕ್ಕ ಎಲ್ಲರೂ ....

ಇನ್ನ ಅಲ್ಲಿನ ನೀರಿನ ಪರಿಸ್ತಿತಿ ., ಇದ್ರೆ ಊರಿಗೆ ಒಂದು ಕೈ ಪಂಪು ಇಲ್ಲವಾದಲ್ಲಿ ನೀರಿಗಾಗಿ ಕಿಲೋಮೀಟರು ಹೋಗಬೇಕಾದ ಪರಿಸ್ತಿತಿ .,
ಒಟ್ಟಾರೆಯಾಗಿ ಅಲ್ಲಿಯ ಜನರ ಬದುಕು ತೀರ ಕಷ್ಟಕರ . , ಈ ರಾಯಚೂರ ಪ್ರಯಾಣ ನನಗೊಂದು ಪಾಠ ಕಳಿಸಿತ್ತು ., ಮನಸಿನಲ್ಲಿ ಒಂದು ದೊಡ್ಡ ಗಾಯ ಮಾಡಿತ್ತು .,

"ಸದಾ ನಮಗಿಂತ ಮೇಲಿನವರನ್ನ (ಶ್ರೀಮಂತರನ್ನ) ನೋಡಿ ಅಯ್ಯೋ ನಮಗೆ ಅದಿಲ್ಲ ., ನಾವು ಅಲ್ಲಿರಬೇಕು .,ಎಂದು ಸದಾ ಕೊರಗುವ ನಾವು ಅಲ್ಲಿನ ಬದುಕ್ಕನ್ನ ನೋಡಿದರೆ ಖಂಡಿತವಾಗಿ ದೇವರಲ್ಲಿ ನಮಗೇನು ಬೇಡೋಲ್ಲ, ನಿ ಕೊಟ್ಟಿರಿವುದು ಸಾಕು, ಅಲ್ಲಿನ ಜನರಿಗೂ ಸ್ವಲ್ಪ ನೆಮ್ಮದಿ ಬದುಕ ಕೊಡು ಅಂತ ಖಂಡಿತ ಬೇಡುತ್ತೇವೆ "

"ನನ್ನ ಜೀವನದಲ್ಲಿ ಅದಿಲ್ಲ ಇದಿಲ್ಲ ., ನನಗೆ ಇನ್ನೂ ಬೇಕು .,ನನ್ನ ಜೀವನದ ಹಾದಿ ಸರಿಯಿಲ್ಲ ಎನ್ನುವ ಮನಸುಗಳು " ಒಮ್ಮೆಯಾದರು ರಾಯಚೂರಿಗೆ ಹೋಗಲೇಬೇಕು !!!


ಕೊನೆಯದಾಗಿ "ದೇವರು" ಎನಿಸಿಕೊಂಡಿರುವ ಆ "Invisible Legend"ಗೆ

ಓ ದೇವರೇ ..,
ಇರುವವರಂತೂ ನಿನ್ನ ಬೇಡುವುದಿಲ್ಲ .,
ಬೇಡದಿದ್ದರೂ ಎಲ್ಲವನ್ನೂ ಮತ್ತೆ ಮತ್ತೆ ಅವರಿಗೇ ನೀಡುತ್ತಿಯ .,
ಇಲ್ಲದವರು ನಿನ್ನ ಕಾಡಿ ಬೇಡಿದರು .,
ನೀ ಅವರಿಗೇನು ನೀಡುತ್ತಿಲ್ಲ .,
ದಯಮಾಡಿ ಅವರ ಬದುಕಿಗೆ ಆಸರೆಯಾಗು .,
ಅವರ ಪ್ರತಿ ಹೆಜ್ಜೆಗೆ ಬೆಳಕಾಗು !!!















1 comment:

Dimpi said...

HAey Charlie good re u had a nice Experience & moreover u expressed that in ur own wayz :-)